ಗಂಗಾವತಿ: ಪಿತ್ರಾಜಿತ ಆಸ್ತಿಯ ವಾರಸುದಾರರಾದ ಜೋಗಿನ್ ಭರಮಪ್ಪ ತಂದೆ ಅನಾಳಪ್ಪ ವಾಲ್ಮೀಕಿ ನಾಯಕ ಅವರ ಭೂಮಿಗೆ ಸಂಬಂಧಿಸಿದಂತೆ ಪ್ರಕರಣ ಗಂಗಾವತಿ ನ್ಯಾಯಾಲಯದಲ್ಲಿ 8/2021 ರಂದು ದಾವೆ ಹೂಡಲಾಗಿದ್ದು ಈ ಹಿನ್ನೆಲೆಯಲ್ಲಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಂದ ಅನಾಮಿಕ ಕರೆಗಳ ಮೂಲಕ ಜೀವ ಬೆದರಿಕೆ ಹಾಕಲಾಗುತ್ತಿದ್ದು. ಇದಕ್ಕೆ ಸಂಬಂಧಿಸಿದಂತೆ ಜೀವ ಭದ್ರತೆ ಕಲ್ಪಿಸುವಂತೆ ರಮೇಶ ನಾಯಕ ಜೋಗಿನ್ ಲೋಕಾಯುಕ್ತ ಎಸ್ಪಿ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು. ತಾಲೂಕಾ ಪಂಚಾಯತ್ ಮಂಥನ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಕುಂದು ಕೊರತೆಗಳನ್ನು ಸ್ವೀಕರಿಸಲು ಆಗಮಿಸಿದ ಲೋಕಾಯುಕ್ತರಿಗೆ ಅರ್ಜಿದಾರರಾದ ರಮೇಶ ಜೋಗಿನ್ ಅವರು ಗಂಗಾವತಿ ನಗರದ ಸರ್ವೆ ನಂಬರ್ 46 /ಅ ಸಂಬಂಧಿಸಿದಂತೆ 16 ಎಕರೆ 11ಗುಂಟೆ ಪೈಕಿ ಸರ್ಕಾರಕ್ಕೆ 1 ಎಕರೆ 33 ಗುಂಟೆ ಟಿ.ಡಿ. ಪಿ. ಗೆ ಸ್ವಾದಿನ ಗೊಂಡಿರುತ್ತದೆ.
ಉಳಿದ ಭೂಮಿ 14 ಎಕರೆ 18 ಗುಂಟೆ ಗಣ್ಯ ವ್ಯಕ್ತಿಗಳು ಪ್ರಭಾವದಿಂದ ಪಹಣಿಯಲ್ಲಿ ಏಕಾಏಕೆ ಬಂದು ಬೇರೆ ವ್ಯಕ್ತಿಗಳಿಗೆ ವೈವಾಟು ಆಗಿರುತ್ತದೆ ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮೂಲ ದಾಖಲೆಗಳನ್ನು ನಾವು ಹೊಂದಿದ್ದು. ಮತ್ತಷ್ಟು ದಾಖಲಾತಿ ಗಳಿಗಾಗಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಪತ್ರ ಹಾಗೂ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡುವಂತೆ ಹಲವಾರು ಸಾರಿ ಮನವಿ ಮಾಡಿದರು ಸಹ ಇದುವರೆಗೂ ಯಾವುದೇ ಅಧಿಕಾರಿ ವರ್ಗದವರು ಸ್ಪಂದಿಸದೆ ಇರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕದ ರಾಜ್ಯಪಾಲರಿಗೂ ಹಾಗೂ ಮುಖ್ಯಮಂತ್ರಿಗಳು ಕೊಪ್ಪಳ ಉಸ್ತುವಾರಿ ಸಚಿವರು ಗಂಗಾವತಿ ಶಾಸಕರಿಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ನೀಡಿದರು ಜೀವ ಭದ್ರತೆಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಗಮನಿಸಿದರೆ ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವಕ್ಕೆ ಆಪತ್ತು ಬರುವ ಸಾಧ್ಯತೆಗಳು ಇದ್ದು. ನಮ್ಮನ್ನೇ ನಂಬಿಕೊಂಡಿರುವ ನಮ್ಮ ಕುಟುಂಬಸ್ಥರ ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ ಎಸ್ಪಿ ಅವರಿಗೆ ರಮೇಶ ಜೋಗಿನ್ ಮನವಿ ಮಾಡಿದ್ದಾರೆ.
ಕಾರಣ ಉದಾಹರಣೆ ಎಂಬಂತೆ
ಇತ್ತೀಚಿಗಷ್ಟೇ ಗಂಗಾವತಿಯಲ್ಲಿ ಕೊಲೆಗಳ ಪ್ರಕರಣ ಮಾರಣ್ಯಂತಿಕ ಹಲ್ಲೆಗಳು ಸೇರಿದಂತೆ ಪ್ರಕರಣಗಳು ಹೆಚ್ಚುತ್ತಿದ್ದು ನಮಗೆ ರಕ್ಷಣೆ ನೀಡಬೇಕೆಂದು ರಮೇಶ್ ಅವರು ಲೋಕಾಯುಕ್ತ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.








