ಉಡುಪಿ ತಾಲೂಕು ಆಡಳಿತ ಸೌಧದ ಸುತ್ತಮುತ್ತ ಪ್ಲಾಸ್ಟಿಕ್ ಗಳ ಕಸದ ರಾಶಿಗಳು ತುಂಬಿ ಹೋಗಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಾ ಹಾಗೆ ಕಾಣುತ್ತಿದೆ.
ನೂರಾರು ಜನರು ದಿನಂಪ್ರತಿ ತಮ್ಮ ಕೆಲಸಗಳಿಗೆ ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಅಲ್ಲಿದ್ದ ಅಧಿಕಾರಿಗಳು ಮಾತ್ರ ಅವರ ಕೆಲಸವಾಯಿತು ಅವರಾಯಿತು ಅನ್ನುವ ಹಾಗೆ ಇದ್ದು, ಕಚೇರಿ ಸುತ್ತಮುತ್ತ ಮಾತ್ರ ಗಬ್ಬು ಎಬ್ಬಿಸಿಟ್ಟಿದ್ದಾರೆ
ತಾಲೂಕು ಕಚೇರಿ ಸುತ್ತಮುತ್ತಲಿನ ಪ್ರದೇಶ ಶುಚಿಗೊಳಿಸದೇ ಹಾಗೆ ಬಿಟ್ಟಿರುವುದು ಎಷ್ಟು ಸರಿ.?
ತಕ್ಷಣವೇ ಸ್ಥಳೀಯ ಆಡಳಿತವು ಈ ಬಗ್ಗೆ ಗಮನಹರಿಸಿ, ಕಸ ವಿಲೇವಾರಿ ಮಾಡಿ, ಸ್ವಚ್ಛತೆ ಮಾಡಬೇಕೆಂದು
ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಆಗ್ರಹ ಮಾಡುತ್ತಿದೆ.








