ಬೀದರ ಜಿಲ್ಲಾ ಕಳೆದ ಒಂದು ತಿಂಗಳಲ್ಲಿ ಗಾಂಜಾ, ತಂಬಾಕು ಪದಾರ್ಥ, ಪಾನ ಮಸಾಲ, ಪಡಿತರ ಅಕ್ಕಿ, ಸರಾಯಿ ಹಾಗೂ ಜೂಜಾಟಗಳ ಮೇಲೆ ದಾಳಿ 59 ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಮುದ್ದೆಮಾಲು ಜಪ್ತಿ 142 ಜನ ಆರೋಪಿತರ ಬಂಧನ”*
ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ರವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ರವರು ಜಿಲ್ಲೆಯನ್ನು ನಶಾಮುಕ್ತ ಮತ್ತು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಸಂಕಲ್ಪ ಹೊಂದಿದ್ದು, ಅದರಂತೆ ಜಿಲ್ಲೆಯ ಮೂರು ಉಪ-ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿರವರು ಸತತ ಪ್ರಯತ್ನಿಸುತ್ತಿದ್ದು ದಿನಾಂಕ: 01/01/2025 ರಿಂದ ದಿನಾಂಕ: 05/02/2025 ರ ವರೆಗೆ ಒಟ್ಟು 1,34,60,744=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿರವರ ಅತ್ಯುತ್ತಮ ಕಾರ್ಯಕ್ಕೆ ಪ್ರಶಂಸಿಸಿ ಶ್ಲಾಘಿಸಲಾಗಿದೆ.
ಜಿಲ್ಲೆಯನ್ನು ಅಪರಾಧ ಮುಕ್ತ, ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ನಾಗರಿಕರು ಸಹಕರಿಸಲು ಕೊರಲಾಗಿದೆ. ಬೀದರ ಜಿಲ್ಲಾ ಪೊಲೀಸ್ ಸದಾ ಜಿಲ್ಲಾ ಜನರ ಸೇವೆಯಲ್ಲಿ.
ನಿರಂತರ ಪಾಲ್ಗೊಳ್ಳುತ್ತಿವೆ.
ಪ್ರದೀಪ್ ಗುಂಟಿ. ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ.








