ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ; ಮೋದಿ ಸ್ವಾಗತಕ್ಕೆ ಕೃಷ್ಣ ನಗರಿ ಸಜ್ಜು

28 Nov 2025
ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನ.28) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಶ್ರೀಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡುತ್ತಿರುವ ನೆಚ್ಚಿನ ಪ್ರಧಾನಿಯವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ ಸಹಿತ ವೇದ ಮಂತ್ರಗಳ ಪಠನದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ.


ಪುತ್ತಿಗೆ ಶ್ರೀ ಸನ್ಯಾಸಾಶ್ರಮದ ಸುವರ್ಣ ಮಹೋತ್ಸವ

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಪ್ರವೇಶಿಸಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸುವರ್ಣ ಮಹೋತ್ಸವದ ಭಾಗವಾಗಿಯೂ ಈ ಕಾರ್ಯಕ್ರಮ ನಡೆಯ ಲಿದೆ. ವಿಶೇಷವಾಗಿ ದೇವರಿಗೆ ಸುವರ್ಣ ತೀರ್ಥ ಮಂಟಪ ಸಮರ್ಪಣೆಯನ್ನು ಶ್ರೀಪಾದರು ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮಾಡುತ್ತಿದ್ದಾರೆ. ಮೋದಿಯವರು ಶ್ರೀ ಕೃಷ್ಣ ಮಠಕ್ಕೆ ಪ್ರವೇಶಿಸಿ ದೇವರ ದರ್ಶನ ಪಡೆದ ಅನಂತರ ಸುವರ್ಣ ಮಂಟಪದ ಸಮರ್ಪಣೆ ಮಾಡಲಿದ್ದಾರೆ.


ಶ್ರೀಮಠದ ಪರಿಸರ ಸರ್ವಾಲಂಕೃತ

ಪ್ರಧಾನಿ ನರೇಂದ್ರ ಮೋದಿಯವರ ಆಗ ಮನದ ಹಿನ್ನೆಲೆಯಲ್ಲಿ ಇಡೀ ಮಠದ ಪರಿಸರ ವನ್ನು ಅಲಂಕಾರ ಮಾಡಲಾಗಿದೆ. ವಿಶೇಷವಾಗಿ ರಥಬೀದಿಯ ಆವರಣದಲ್ಲಿ ಇರುವ ಕನಕನ ಗುಡಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಪ್ರಧಾನಿಯವರು ಕನಕನ ಮೂರ್ತಿಗೆ ಮಾಲಾರ್ಪಣೆ ಮಾಡಲಿರುವುದರಿಂದ ಇಡೀ ಮಂದಿರದ ಪರಿಸರವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಕನಕನ ಕಿಂಡಿ, ಕನಕ ಗೋಪುರ, ಶ್ರೀ ಕೃಷ್ಣಮಠದ ಮುಖ್ಯದ್ವಾರ, ಗೀತಾ ಮಂದಿರ ಹೀಗೆ ಎಲ್ಲೆಡೆಯಲ್ಲೂ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ದೇವಸ್ಥಾನದ ಒಳಭಾಗದಲ್ಲಿ ಹೂವಿನ ಅಲಂಕಾರವು ಇನ್ನಷ್ಟು ಆಕರ್ಷಕವಾಗಿದೆ.


ಪಾರಾಯಣಕ್ಕೆ ಬೃಹತ್‌ ವೇದಿಕೆ

ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಭಾಂಗಣ ಹಾಗೂ ವೇದಿಕೆ ನಿರ್ಮಾಣ ಕಾರ್ಯ ಗುರುವಾರ ರಾತ್ರಿಯೇ ಪೂರ್ಣಗೊಂಡಿದೆ. ವೇದಿಕೆಯ ಮೇಲ್ಭಾಗದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ ಅಳವಡಿಕೆ ಮಾಡಲಾಗಿದೆ. ಒಂದು ಭಾಗದಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಭಾವಚಿತ್ರ, ಇನ್ನೊಂದು ಭಾಗದಲ್ಲಿ ಮೋದಿಯವರ ಭಾವಚಿತ್ರ ಅಳವಡಿಸಲಾಗಿದೆ. ಹಾಗೆಯೇ ಲಕ್ಷ ಕಂಠ ಗೀತಾ ಪಾರಾಯಣ ಎಂಬುದನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ವೇದಿಕೆಯ ಕೆಳಭಾಗದಲ್ಲಿ ಒಂದು ಕಡೆ ಪುತ್ತಿಗೆ ಮಠಾಧೀಶರು ಇನ್ನೊಂದು ಕಡೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಭಾವಚಿತ್ರ ಅಳವಡಿಸಲಾಗಿದೆ. ಅನಂತರ ಮುಕ್ತ ವಲಯ ಇರಲಿದೆ.


ಇಲ್ಲಿಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಅನಂತರ ಪಾರಾಯಣಕ್ಕೆ ಕುಳಿತುಕೊಳ್ಳುವವರಿಗೆ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಪಕ್ಕದಲ್ಲಿ ಗಣ್ಯಾತಿಗಣ್ಯರಿಗೆ, ಗಣ್ಯರಿಗೆ, ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಹಿಂಭಾಗದಲ್ಲಿ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಬೃಹದಾಕಾರದ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ.


ಮೋದಿಗೆ ಪತ್ರೊಡೆ!

ಪ್ರಧಾನಿ ನರೇಂದ್ರ ಮೋದಿಯವರು ಗೀತಾ ಮಂದಿರದಲ್ಲಿ ಲಘು ಉಪಾಹಾರ ಸೇವನೆ ಮಾಡಲಿದ್ದಾರೆ. ಈ ವೇಳೆ ಅವರಿಗೆ ಶ್ರೀ ಕೃಷ್ಣ ಪ್ರಸಾದದ ಜತೆಗೆ ಪತ್ರೊಡೆ ಹಾಗೂ ಕರಾವಳಿಯ ವಿಶೇಷ ಖಾದ್ಯಗಳನ್ನು ನೀಡಲಾಗುತ್ತದೆ.


ಮೋದಿ ಇಂದಿನ ಕಾರ್ಯಕ್ರಮ

ಉಡುಪಿ: ಉಡುಪಿ, ಕೃಷ್ಣಮಠದಲ್ಲಿ ಶುಕ್ರವಾರ ಪ್ರಧಾನಿಯವರ ದಿನಚರಿ ಹೀಗಿರಲಿದೆ:


-ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮನ


-ಬೆ.11ರಿಂದ ಬನ್ನಂಜೆ-ಕಲ್ಸಂಕದ ವರೆಗೆ ರೋಡ್‌ ಶೋ


-ಶ್ರೀಕೃಷ್ಣ ಮಠದ ರಥಬೀದಿಗೆ ಪ್ರವೇಶ


-ಕನಕ ಮಂದಿರಕ್ಕೆ ಭೇಟಿ, ಕನಕನ ಮೂರ್ತಿಗೆ ಪುಷ್ಪಾರ್ಚನೆ


-ಕನಕ ಕಿಂಡಿಗೆ ಜೋಡಿಸಿರುವ ಕನಕ ಕವಚ ಉದ್ಘಾಟನೆ


-ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ


-ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ


-ಶ್ರೀ ಕೃಷ್ಣ ದರ್ಶನ, ಸುವರ್ಣ ತೀರ್ಥ ಮಂಟಪ ಉದ್ಘಾಟನೆ


-ಪರ್ಯಾಯ ಶ್ರೀಪಾದರಿಂದ ಶ್ರೀ ಕೃಷ್ಣ ದೇವರ ಎದುರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ


-ಚಂದ್ರಶಾಲೆಯಲ್ಲಿ ಮಠಾಧೀಶರೊಂದಿಗೆ ಚರ್ಚೆ


-ಮುಖ್ಯಪ್ರಾಣ ದೇವರ ದರ್ಶನ


-ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಪಾದರ ಜತೆ ಚರ್ಚೆ


-ಅನಂತಶಯನ ಮೂರ್ತಿ ಉದ್ಘಾಟನೆ


-ಲಘು ಉಪಾಹಾರ ಸೇವನೆ


-ಗೀತಾ ಮಂದಿರದಿಂದ ಭಗವದ್ಗೀತೆ ಪಾರಾಯಣದ ಮುಖ್ಯ ವೇದಿಕೆಗೆ ಪಯಣ


-ಸಾಮೂಹಿಕವಾಗಿ ಭಗವದ್ಗೀತೆಯ 15ನೇ ಅಧ್ಯಾಯ ಪಠನ


-ಶ್ರೀಮಠದಿಂದ ವಿಶೇಷ ಗೌರವಾಭಿನಂದನೆ ಸ್ವೀಕಾರ


-ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಷಣ


-ಮ.1 ಗಂಟೆಗೆ ವೇದಿಕೆಯಿಂದ ಹೆಲಿಪ್ಯಾಡ್‌ಗೆ ನಿರ್ಗಮನ


-ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಗೋವಾದ ಕಡೆಗೆ ಪಯಣ


ಕೋಟಿ ಗೀತಾ ಲೇಖನ ಯಜ್ಞ ನಮ್ಮ ಪರ್ಯಾಯ ಅವಧಿಯ ಪ್ರಧಾನ ಕಾರ್ಯಕ್ರಮ. ಲಕ್ಷ ಕಂಠ ಗೀತಾ ಪಾರಾಯಣದೊಂದಿಗೆ ಪ್ರಧಾನಿ ಮೋದಿಯವರ ಮೂಲಕ ಅದನ್ನು ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪುತ್ತಿಗೆ ಮಠ

Recently Updated:

ಕಾರ್ಕಳದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಕುಲಾಲ ಸಮಾಜದ ಕುಟುಂಬ ಮೇಲೆ ದೌರ್ಜನ್ಯ  ಕಣ್ಣು ಮುಚ್ಚಿ ಕೂತ ಜನ ಪ್ರತಿನಿಧಿಗಳು, ಆಡಳಿತ ವ್ಯವಸ್ಥೆ.! ನಮಗೆ ಅನ್ಯಾಯ ಮಾಡಬೇಡಿ, ದಬ್ಬಾಳಿಕೆ ಮಾಡಬೇಡಿ ಎನ್ನುತ್ತಾ ಸಮಾಜದ ಎದುರು ಕೈ ಚಾಚುತ್ತಿರುವ ಈ ಕುಟುಂಬ ಕಾರ್ಕಳದ ಕುಕ್ಕುಂದೂರುನದ್ದು.ಕಾರ್ಕಳದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಕುಲಾಲ ಸಮಾಜದ ಕುಟುಂಬ ಮೇಲೆ ದೌರ್ಜನ್ಯ ಕಣ್ಣು ಮುಚ್ಚಿ ಕೂತ ಜನ ಪ್ರತಿನಿಧಿಗಳು, ಆಡಳಿತ ವ್ಯವಸ್ಥೆ.! ನಮಗೆ ಅನ್ಯಾಯ ಮಾಡಬೇಡಿ, ದಬ್ಬಾಳಿಕೆ ಮಾಡಬೇಡಿ ಎನ್ನುತ್ತಾ ಸಮಾಜದ ಎದುರು ಕೈ ಚಾಚುತ್ತಿರುವ ಈ ಕುಟುಂಬ ಕಾರ್ಕಳದ ಕುಕ್ಕುಂದೂರುನದ್ದು.
ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ‌ ವಾರ್ಷಿಕ ಶಿಬಿರ ಫೆ. 28ರಿಂದ 7 ದಿನಗಳ ಕಾಲ ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದ್ದು ಮಾ. 6ರಂದು ಸಮಾರೋಪ ಸಮಾರಂಭ.   ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ‌ ವಾರ್ಷಿಕ ಶಿಬಿರ ಫೆ. 28ರಿಂದ 7 ದಿನಗಳ ಕಾಲ ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದ್ದು ಮಾ. 6ರಂದು ಸಮಾರೋಪ ಸಮಾರಂಭ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯಾದ  ಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆಯವರು  ಹೊಸ್ಮಾರು ಕುಲಾಲ ಸಮುದಾಯ ಭವನದ ಅಭಿವೃದ್ಧಿಗೆ  2.00000.ಮೊತ್ತದ ಮಂಜೂರಾತಿ..     ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯಾದ ಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆಯವರು ಹೊಸ್ಮಾರು ಕುಲಾಲ ಸಮುದಾಯ ಭವನದ ಅಭಿವೃದ್ಧಿಗೆ 2.00000.ಮೊತ್ತದ ಮಂಜೂರಾತಿ..
ಹೊರ್ನಾಡಿ ವಲಕುತ್ತೂರು ಪುರಾತನ ಇತಿಹಾಸ ತಕಾಲದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏಕವಾರ ಮಹಾರುದ್ರಾಭಿಷೇಕ  ಮತ್ತು ಮಹಾಪೂಜೆ ನಡೆಯಲಿದೆ..ಹೊರ್ನಾಡಿ ವಲಕುತ್ತೂರು ಪುರಾತನ ಇತಿಹಾಸ ತಕಾಲದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏಕವಾರ ಮಹಾರುದ್ರಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ..
ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಗುರುವಾರ ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೧೯ರಿಂದ ೨೧ ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದರು.ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಗುರುವಾರ ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೧೯ರಿಂದ ೨೧ ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದರು.
ಕಾರ್ಕಳ : ಕಾರ್ಕಳ ತಾ. ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಗೆ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖಾ ಸಭೆಗೆ ಗೈರಾಗಿದ್ದ ಹಿನ್ನೆಲೆ ಸಭೆ ತೊರೆದು ಜನತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿಕಾರ್ಕಳ : ಕಾರ್ಕಳ ತಾ. ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಗೆ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖಾ ಸಭೆಗೆ ಗೈರಾಗಿದ್ದ ಹಿನ್ನೆಲೆ ಸಭೆ ತೊರೆದು ಜನತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿ
ಕಾರ್ಕಳ, ಹೆಬ್ರಿ ವಲಯದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಪದಗ್ರಹಣ  ಪತ್ರಕರ್ತರ ಒಗ್ಗಟ್ಟು ಮತ್ತು ಹಿತರಕ್ಷಣೆಗೆ ಗಣ್ಯರ ಕರೆ.ಕಾರ್ಕಳ, ಹೆಬ್ರಿ ವಲಯದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಪದಗ್ರಹಣ ಪತ್ರಕರ್ತರ ಒಗ್ಗಟ್ಟು ಮತ್ತು ಹಿತರಕ್ಷಣೆಗೆ ಗಣ್ಯರ ಕರೆ.
ಉಡುಪಿ ಎಂಜಿಎಂ ಕಾಲೇಜ್ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಕೆನೆಟಿಕ್ ಹೋಂಡಕ್ಕೆ ಮಹೇಂದ್ರ ಪಿಕಪ್ ಡಿಕ್ಕಿ ಸ್ಥಳದಲ್ಲಿ  65 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ದುರ್ಮರಣ.ಉಡುಪಿ ಎಂಜಿಎಂ ಕಾಲೇಜ್ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಕೆನೆಟಿಕ್ ಹೋಂಡಕ್ಕೆ ಮಹೇಂದ್ರ ಪಿಕಪ್ ಡಿಕ್ಕಿ ಸ್ಥಳದಲ್ಲಿ 65 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ದುರ್ಮರಣ.
ಉಡುಪಿ ಎಂಜಿಎಂ ಕಾಲೇಜ್ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಕೆನೆಟಿಕ್ ಹೋಂಡಕ್ಕೆ ಮಹೇಂದ್ರ ಪಿಕಪ್ ಡಿಕ್ಕಿ ಸ್ಥಳದಲ್ಲಿ  65 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ದುರ್ಮರಣ.ಉಡುಪಿ ಎಂಜಿಎಂ ಕಾಲೇಜ್ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಕೆನೆಟಿಕ್ ಹೋಂಡಕ್ಕೆ ಮಹೇಂದ್ರ ಪಿಕಪ್ ಡಿಕ್ಕಿ ಸ್ಥಳದಲ್ಲಿ 65 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ದುರ್ಮರಣ.