ಕರಾವಳಿ ಕರ್ನಾಟಕದ ಸುಂದರ ಬೀಚ್ಗಳು ಇಂದು ಕಣ್ಣೀರು ಸುರಿಸುತ್ತಿವೆ. ಕಾರಣ - *ರಾತ್ರಿ ಹೊತ್ತಿನಲ್ಲಿ ನಡೆಯುವ "ವಿಷದ ವ್ಯಾಪಾರ"*. ಹಗಲು ಹೊತ್ತಲ್ಲಿ ಪರಿಸರ ಪ್ರೇಮಿ ಮುಖವಾಡ ಹಾಕಿಕೊಂಡು ತಿರುಗುವ ಕೆಲವು ಕೈಗಾರಿಕೆಗಳು, ಟ್ಯಾಂಕರ್ ಮಾಫಿಯಾ, ಹೋಟೆಲ್ಗಳು ಸೂರ್ಯ ಮುಳುಗಿದ ಕೂಡಲೇ ತಮ್ಮ ನಿಜ ಬಣ್ಣ ತೋರಿಸುತ್ತಿವೆ.
*ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.*
"ರಾತ್ರಿ"ಯನ್ನೇ ಯಾಕೆ ಆಯ್ಕೆ ಮಾಡಿಕೊಳ್ತಾರೆ?*
KSPCB ಅಧಿಕಾರಿಗಳು ಇರಲ್ಲ*: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸಂಜೆ 5:30ಕ್ಕೆ ಮನೆಗೆ ಹೋಗ್ತಾರೆ. ರಾತ್ರಿ ಪರಿಶೀಲನೆ ಇರಲ್ಲ.
ETP ವೆಚ್ಚ ಉಳಿಸಲು*: ತ್ಯಾಜ್ಯ ಸಂಸ್ಕರಣಾ ಘಟಕ - ETP ಓಡಿಸಲು ದಿನಕ್ಕೆ 50 ಸಾವಿರದಿಂದ 2 ಲಕ್ಷ ಖರ್ಚು. ಅದನ್ನು ಉಳಿಸಿ ನೇರವಾಗಿ ಸಮುದ್ರಕ್ಕೆ ಬಿಟ್ಟರೆ "ಲಾಭ".
ಸಾಕ್ಷಿ ನಾಶ*: ಕತ್ತಲಲ್ಲಿ ಯಾರೂ ವಿಡಿಯೋ ಮಾಡಲ್ಲ, ನಂಬರ್ ಪ್ಲೇಟ್ ಕಾಣಲ್ಲ ಅನ್ನೋ ಕುರುಡು ನಂಬಿಕೆ.
ಸಮುದ್ರ "ದೊಡ್ಡ ಚರಂಡಿ" ಅಲ್ಲ*: ದಿನಕ್ಕೆ 10 ಲಕ್ಷ ಲೀಟರ್ ಕಲ್ಮಶ ಬಿಟ್ಟರೂ ಸಮುದ್ರ ದೊಡ್ಡದಿದೆ, ಯಾರಿಗೂ ಗೊತ್ತಾಗಲ್ಲ ಅನ್ನೋ ಮನಸ್ಥಿತಿ.
ಇದರಿಂದ ಆಗುವ ಅನಾಹುತಗಳೇನು?*
ಮೀನುಗಾರರ ಬದುಕಿಗೆ ಕೊಳ್ಳಿ*: ಕಲ್ಮಶ ಸೇರಿದ 2 ಕಿ.ಮೀ ವ್ಯಾಪ್ತಿಯಲ್ಲಿ ಮೀನು ಸಾಯುತ್ತವೆ, ಮೊಟ್ಟೆ ಇಡಲ್ಲ. ಸಾಂಪ್ರದಾಯಿಕ ಮೀನುಗಾರರು ಬಡತನಕ್ಕೆ ತಳ್ಳಲ್ಪಡ್ತಾರೆ.
ಕ್ಯಾನ್ಸರ್ ಕರಾವಳಿ" ಆತಂಕ*: ರಾಸಾಯನಿಕ ಮಿಶ್ರಿತ ನೀರಲ್ಲಿ ಬೆಳೆದ ಮೀನು, ಏಡಿ ತಿಂದರೆ ಚರ್ಮ ರೋಗ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಅಪಾಯ.
ಪ್ರವಾಸೋದ್ಯಮಕ್ಕೆ ಪೆಟ್ಟು*: ವಿದೇಶಿ ಪ್ರವಾಸಿಗರು "ಕಪ್ಪು ಬೀಚ್" ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಕರ್ನಾಟಕದ ಮಾನ ಹರಾಜು.
ಹವಳ ದಿಬ್ಬಗಳ ಸಾವು*: ನೇತ್ರಾಣಿ, ಮುರುಡೇಶ್ವರ ಬಳಿಯ ಹವಳ ದಿಬ್ಬಗಳು ರಾಸಾಯನಿಕದಿಂದ ಬಿಳಿಚಿ ಸಾಯುತ್ತಿವೆ. ಒಮ್ಮೆ ಸತ್ತರೆ 100 ವರ್ಷ ಬೇಕು ಮತ್ತೆ ಬೆಳೆಯಲು.
ಇದರ ಕರಾಳ ಸತ್ಯದ ಸಂಪೂರ್ಣ ವರದಿ ಪಬ್ಲಿಕ್ ಫೈಲ್ ಪತ್ರಿಕೆಯಲ್ಲಿ ವೀಕ್ಷಿಸಿ








