ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮ ಗೋಷ್ಠಿ ಮಾಡಿ ತಮ್ಮ ಅಳಲನ್ನು ತೋಡಿ ಕೊಂಡರು.
ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಅದರ ಜೊತೆಗೆ ಜಯಂತಿ ಆಚಾರ್ಯ ರ ಮನೆ.
ಅಲ್ಲಿನ ಜಮೀನುದಾರ ರೊಬ್ಬರು ಕುಂಬಾರ ಸಮಾಜದ ಹಾಗೂ ವಿಶ್ವ ಕರ್ಮ ಸಮಾಜದ ಮಹಿಳೆಯ ಮನೆಯವರಿಗೆ ಹಕ್ಕು ಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತ ಬಂದಿದ್ದಾರೆ
ಬಹುಷಃ ದೇಶ ಎಷ್ಟು ಮುಂದುವರಿದರು ಈ ಆಸ್ತಿವಂತರ ದೌರ್ಜನ್ಯ, ಬಡ ಜನರ ಮೇಲೆ ದಬ್ಬಾಳಿಕೆ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ.
ಆ ಮನೆಯವರಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುವುದು, ಅಲ್ಲಿನ ಜಾಗದಲ್ಲಿ ಇದ್ದ ಸಣ್ಣ ಕೃಷಿ ಹಾಳು ಮಾಡುವುದನ್ನು ಅಲ್ಲಿನ ಜಮೀನುದಾರರು ಮಾಡುತ್ತಿದ್ದಾರೆ.
ಮಳೆಗಾಲ ಬಂದಾಗ ಈ ಬಡ ಕುಟುಂಬದ ಮನೆಯ ಸುತ್ತ ದೊಡ್ಡ ಗುಂಡಿ ತೆಗೆದು ಅದರಲ್ಲಿ ನೀರು ನಿಲ್ಲುವ ಹಾಗೆ ಮಾಡಿ ಮನೆಯನ್ನು ಕೆಡವಿ ಹಾಕುವ ಕಾರ್ಯವನ್ನು ಕೂಡಾ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆ ಗುಂಡಿ ಮುಚ್ಚಿದ್ದರು.
ಬಳಿಕ ಪೊಲೀಸ್ ಕೇಸು ಆಗಿತ್ತು.
ಈಗ ಪುನಃ ದೌರ್ಜನ್ಯ ಆರಂಭ ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂಬಾರ ಸಮುದಾಯದ ಜನ ನಮಗೆ ರಕ್ಷಣೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಗುಲಾಬಿ ಮೂಲ್ಯ ಹಾಗೂ ಜಯಂತಿ ಆಚಾರ್ಯ ಕುಟುಂಬ ಕಾಯುತ್ತಿದೆ.
ಇಂದಿನ ಆಧುನಿಕ ಕಾಲದಲ್ಲಿ ಕೂಡಾ ಇಂತಹ ದೌರ್ಜನ್ಯ ಆಗುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ








