ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾನಸಿಕ ಆರೋಗ್ಯ ವಿಭಾಗದ ಮನೋಸಾಮಾಜಿಕ ಕಾರ್ಯಕರ್ತೆ ವಸಂತಿ ಆರ್.ನಾಯ್ಕರಿಗೆ ಮದರ್ ಆಪ್ ಸೋಷಿಯಲ್ ವರ್ಕ್ ಜೇನ್ ಆಡಮ್ಸ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ದಾವಣಗೆರೆಯಲ್ಲಿ ಪ್ರದಾನ ಮಾಡಲಾಯಿತು. ರಾಜ್ಯ ಫ್ರೋಫೆಷನಲ್ ಸೋಷಿಯಲ್ ವರ್ಕರ್ಸ್ ವೆಲ್ಫೇರ್ ಆಸೋಸಿಯೇಶನ್ ರಾಜಾಧ್ಯಕ್ಷ ಸಂತೋಷ ಕುಮಾರ್ ದಾವಣಗೆರೆ ,ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ಲೋಕೇಶ್, ರಾಜೇಂದ್ರ ಕುಮಾರ್ , ಮಹಾಲಿಂಗಪ್ಪ , ಡಾ.ಮಹೇಶ , ಡಾ.ಪಾಂಡುರಂಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಉಡುಪಿ ಅಜ್ಜರಕಾಡು ಆಸ್ಪತ್ರೆಯ ಮಾನಸಿಕ ವಿಭಾಗದ ಮನೋ ಸಾಮಾಜಿಕ ಕಾರ್ಯಕರ್ತೇ ವಸಂತಿ ಆರ್.ನಾಯ್ಕ್ ಅವರಕಾರ್ಯ ವೈಖರಿ ಯನ್ನು ಗಮನಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸಂತಿ ರಾಘವೇಂದ್ರ ನಾಯ್ಕ್ ಶಿರೂರು ಮುದ್ದುಮನೆ ಬಾಳೆ ಹಿತ್ಲು
ಮಹಾಲಿಂಗ ನಾಯ್ಕ್ ಮತ್ತು ರತ್ನ ದಂಪತಿಯ ಪುತ್ರಿ.ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿರೂರು ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮುದ್ದುಮನೆ ಹಾಗೂ, ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಮಂದಾರ್ತಿಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಮಂದಾರ್ತಿ ಯಲ್ಲಿ ಪಿ.ಯು ಶಿಕ್ಷಣವನ್ನು
ಸಾಮಾಜಿಕ ಕಾರ್ಯದಲ್ಲಿ ಮಾಸ್ಟರ್ ಕಾಲೇಜು ಮತ್ತು
ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರೀನಲ್ಲಿ ಮುಗಿಸಿ ಬಿ. ಎಸ್ .ಡಬ್ಲ್ಯೂ ವನ್ನು ಡಾ. ವಿ .ಬಾಳಿಗೆ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ರೂರಲ್ ಮೆನೇಜಮಂಟ್ ಹಾರಾಡಿ ಬ್ರಹ್ಮಾವರದಲ್ಲಿ ಕಲಿತು ಪ್ರಸ್ತುತ ಉಡುಪಿಯ ಅಜ್ಜರಕಾಡಿನಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ ದಲ್ಲಿ ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ವಿಭಾಗದ ಉದ್ಯೋಗಸ್ಥೆ.
2013ರಿಂದ ಸ್ಫೂರ್ತಿ ಧಾಮದಲ್ಲಿ ಸಮಾಜ ಸೇವಕ ಕೆಲಸದ ಅನುಭವ ಪಡೆದಿರುತ್ತಾರೆ. ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ.
ವೃದ್ಧಾಪ್ಯ , ಅನಾಥಾಶ್ರಮ ಮತ್ತು ಆಸರೆ ಯೋಜನೆಯಡಿಯಲ್ಲಿ ಸಂಯೋಜಕರಾಗಿಯು ತಮ್ಮ ಅನುಭವಗಳಿಂದ ಸೈ ಎನಿಸಿಕೊಂಡಿದ್ದಾರೆ 1-08- 2014 ರಿಂದ 31-08- 2016ರವರೆಗೆ ವಿಹಾನ್ ಯೋಜನೆಯಲ್ಲಿ ದೀಪ್ ಜ್ಯೋತಿ ನೆಟ್ ವರ್ಕ್ ಆಫ್ ಪಾಸಿಟಿವ್ ಪೀಪಲ್ ನಲ್ಲಿ ಕ್ಷೇತ್ರ ಕಾರ್ಯದ ಭಾಗವಾಗಿ ವೃತ್ತಿಪರ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.








