ಬೆಂಗಳೂರಿನ: ಚಿಕ್ಕಬಿದರಕಲ್ಲು ವ್ಯಾಪ್ತಿಯಲ್ಲಿ ಸಣ್ಣದೊಂದು ಕಾಂಡಿಮೆಂಟ್ಸ್ ನೆಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಮಂಜಯ್ಯ ಶೆಟ್ಟಿ ಎಂಬುವರಿಗೆ ಅಲ್ಲಿನ ಸ್ಥಳೀಯ ಪುಡಿ ರೌಡಿಯೊಬ್ಬ ಕುಡಿತದ ನಶೆಯಲ್ಲಿ ಬಂದು ಪುಕ್ಷಟಿಯಾಗಿ ಸಿಗರೇಟು, ಗುಟ್ಕಾ ಕೊಡಲು ಕೇಳಿದಾಗಿ ಅದನ್ನು ಕೊಡಲು ಅಂಗಡಿ ಮಾಲೀಕರು ಒಪ್ಪದಿದ್ದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ,ದಾಂಧಲೆ ನೆಡೆಸಿ,ಹಲ್ಲೆ ಮಾಡಿರುತ್ತಾನೆ, ಶೆಂಡರಬಂಡ. ಇದರಿಂದ ಅಂಗಡಿಯ ಮಾಲೀಕ ಮಂಜಯ್ಯ ಶೆಟ್ಟಿಯವರ ಭುಜ, ಕುತ್ತಿಗೆ ಹಾಗು ಕಣ್ಣಿನ ಮೇಲ್ಪದರಕ್ಕೆ ಹೊಡೆತ ಬಿದ್ದು ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ದೈಹಿಕವಾಗಿ ಹಾಗು ಮಾನಸಿಕವಾಗಿ ನೊಂದಿದ್ದರು.
ಅವರಿಗೆ ಹಾಗೂ ಅವರ ಕುಟುಂಬಕ್ಕೆ,
ಬೆಂಗಳೂರಿನ ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಯವರು,ಸಂಘದ ಪದಾಧಿಕಾರಿಗಳು,ಸೇವಾ ದಳ ಸಮಿತಿಯ ಚೇರ್ ಪರ್ಸನ್, ಡಿ ಬಿ ಪ್ರತಾಪ್ ಶೆಟ್ಟಿ,ಸಂಚಾಲಕರಾದ ಅಮರನಾಥ್ ಎಂ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ್ ಕುಮಾರ್ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ, ರಮೇಶ್ ಜಿ ಶೆಟ್ಟಿ, ಕರವೇ ಪ್ರಸಾದ್ ಶೆಟ್ಟಿ ಹಾಗೂ ಸೇವಾದಳದ ಉಪ ಸಮಿತಿ ಸದಸ್ಯರು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಘಟನೆ ನೆಡೆದ ಅಂಗಡಿಗೆ ಭೇಟಿ ಕೊಟ್ಟು,ಮುಂದೆ ಇಂತಹ ಅಹಿತಕರ ಘಟನೆಗಳು ಜರುಗದಂತೆ ಭದ್ರತೆ ಒದಗಿಸಿಲು ಹಾಗೂ ಅಪರಾಧಿಗೆ ತಕ್ಕ ಶಿಕ್ಷೆಗೆ ಗುರಿಪಡಿಸುವಂತೆ ಪೊಲೀಸರಿಗೆ ಒತ್ತಾಯಿಸಿ, ಗಾಯಳು ಮಂಜಯ್ಯ ಶೆಟ್ಟಿ ಯವರ ಜೊತೆ ಸದಾ ಬೆಂಗಳೂರು ಬಂಟರ ಸಂಘವಿರುತ್ತದೆ ಹಾಗೂ ಬಂಟ ಸಮುದಾಯದ ಯಾವುದೇ ವ್ಯಕ್ತಿಗೆ ಇಂತಹ ತೊಂದರೆಯಾದಲ್ಲಿ ಸದಾ ಅವರಿಗಾಗಿ ಸಂಘವಿರುತ್ತದೆ ಎಂದು ಆಶ್ವಾಸನೆ ನೀಡಲಾಯಿತು.
ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹಾಗು ಹೋಟೆಲ್, ಕಾಂಡಿಮೆಂಟ್ಸ್,ಬೀಡಾ,ಜ್ಯೂಸ್,ಚಾಟ್ಸ್ ಅಂಗಡಿಯವರಿಗೆ ನಿರಂತರವಾಗಿ ಇಂತಹ ಗೂಂಡಾ ವರ್ತನೆ ತೋರುವವರ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ, ಬಂಟ ಸಮುದಾಯದ ಯಾವುದೇ ವ್ಯಕ್ತಿಗೆ ಹಾಗು ವ್ಯಾಪಾರಿಗಳಿಗೆ ಇಂತಹ ಸಮಸ್ಯೆಗಳಾದರೆ ಬಂಟರ ಸಂಘ ಹಾಗು *ಸೇವಾ ದಳ ಸಮಿತಿ* ಸದಾ ಅವರ ಪರವಾಗಿ ನಿಲ್ಲುತ್ತದೆ. ಹಾಗಾಗಿ ಬಂಟ ಸಮುದಾಯದ ವ್ಯಾಪಾರಿಗಳು ಯಾವುದೇ ಹಿಂಜರಿಕೆಯಿಲ್ಲದೆ ಎದೆಗುಂದದೆ ಧೈರ್ಯವಾಗಿ ಗೂಂಡಾಗಿರಿ ಮಾಡುವರ ವಿರುದ್ಧ ಯಾವುದೇ ಭಯವಿಲ್ಲದೆ ಮೊಕದ್ದಮೆ ದಾಖಲಿಸಿದಲ್ಲಿ ಮಾತ್ರ ಇಂಥ ಪುಂಡ ಪುಡಾರಿಗಳನ್ನು ಬಗ್ಗು ಬಡಿಯಲು ಸಾಧ್ಯ.








