ಚನ್ನರಾಯಪಟ್ಟಣ ತಾಲೂಕು, ನುಗ್ಗೆಹಳ್ಳಿ ಹೋಬಳಿಯ ನೋಂದಣಿ ಮತ್ತು ಮುದ್ರಣ ಇಲಾಖೆ ಉಪ ನೊಂದಣಿ ಅಧಿಕಾರಿ ವಿವಾಹ ನೊಂದಣಿ ಅಧಿಕಾರಿಗಳ ಕಚೇರಿ ಒಳಭಾಗದಲ್ಲಿ ಕೆಲವು ವರ್ಷಗಳಿಂದ ಸಿಸಿ ಕ್ಯಾಮೆರಾ ಅಳವಡಿಸಿಲ್ಲ ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಇಲ್ಲಿ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಮ್ಮದಾಗುತ್ತಿಲ್ಲ ಯಾವುದೇ ಕೆಲಸ ಆಗಬೇಕಿದ್ದರೂ ಮಧ್ಯವರ್ತಿಗಳೇ ಇದ್ದಲ್ಲಿ ಮಾತ್ರ ನಮ್ಮ ಕೆಲಸ ಆಗುವುದಕ್ಕೆ ಸಾಧ್ಯ ಮಧ್ಯವರ್ತಿಗಳು ಜನಸಾಮಾನ್ಯರಿಂದ ಹೇಗೆ ಬೇಕು ಹಾಗೆ ಹಣವನ್ನು ವಸೂಲಿ ಮಾಡಲಾಗುತ್ತಿದೆ ಇಂಥ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಎಂದು ಪಬ್ಲಿಕ್ ಫೈಲ್ ಬಳಿ ತಮ್ಮ ಅಳಲನ್ನು ತೋಡಿಕೊಂಡರು ಜನಸಾಮಾನ್ಯ.
ಇಲ್ಲಿ ಯಾರು ಹೇಳುವವರಿಲ್ಲ ಕೇಳುವವರಿಲ್ಲ ಇಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿ ಆಗಿರುತ್ತದೆ. ಸಿಸಿ ಕ್ಯಾಮೆರಾದ ಬಗ್ಗೆ ಸಾಮಾಜಿಕ ಹೋರಾಟಗಾರರು ಹಲವು ಸಂಘಟನೆಗಳು ಇದನ್ನು ಕೇಳಿದರೆ ಇಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವ ಉತ್ತರವೂ ಇಲ್ಲ ಮುಂದಿನ ದಿನಗಳಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಸಿ ಸಿ ಸಿ ಕ್ಯಾಮೆರಾವನ್ನು ಅಳವಡಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕೆನ್ನುವುದೇ ಪಬ್ಲಿಕ್ ಫೈಲ್ ಆಗ್ರಿಸುತ್ತೆ.
ವರದಿ
ಶಂಕರ್ ಗೌಡ. ಎಚ್








