ಸುಮಾರು 4 ಕೋಟಿ ಬೆಲೆ ಬಾಳುವ ವಿವಾದಿತ ಮನೆಯೊಂದನ್ನು ತನ್ನ ಸಂಬಂಧಿಕರ ಹೆಸರಿಗೆ ಬರೆದುಕೊಡುವಂತೆ ನಾಗರಭಾವಿ ನಿವಾಸಿಯೊಬ್ಬರಿಗೆ ನಿರಂತರವಾಗಿ ಕಿರುಕುಳ ನೀಡಿ, ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಹೆದರಿಸಿ, ಬಲವಂತವಾಗಿ ಅವರ ಆಸ್ತಿ ಲಪಟಾಯಿಸುವ ಡೀಲ್ ನಡೆಸುವ ವೇಳೆ ಲೋಕಾಯುಕ್ತ ರೇಡ್ ಆಗಿ ಆಪಾದಿತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ A.V.ಎಸ್ಕೇಪ್..!
ಎಂದಿನಂತೆ ಪೊಲೀಸ್ ಮೇಲಾಧಿಕಾರಿಗಳ ಅಜ್ಞಾಪಾಲಕರಾಗಿ ಮೇಲಧಿಕಾರಿಗಳು ಹೇಳುವ ಕಾನೂನು/ಕಾನೂನುಬಾಹಿರ ಕೆಲಸಗಳನ್ನು ಹಿಂದೆಮುಂದೆ ನೋಡದೆ ಮಾಡುವ ಕಾನ್ಸ್ಟೇಬಲ್’ಗಳು ಲೋಕಾಯುಕ್ತ ಪೊಲೀಸರ ಅತಿಥಿಗಳಾಗಿದ್ದಾರೆ.
ಇಲ್ಲಿ ಶಾಕಿಂಗ್ ವಿಚಾರ ಏನೆಂದರೆ ಪೊಲೀಸರಿಗೆ ತಮ್ಮ ಅಸಾಧಾರಣ ಸೇವೆ ಮತ್ತು ಧೈರ್ಯಕ್ಕೆಂದು ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಈ ರೌಡಿ ಪೊಲೀಸ್ ಆಯ್ಕೆಯಾಗಿದ್ದನಂತೆ. ಈ ಘಟನೆ ನಡೆಯದೇ ಹೋಗಿದ್ದರೆ ಸಾಹೇಬರು ಗರಿಗರಿ ಖಾಕಿ ಧರಿಸಿ ಮುಖ್ಯಮಂತ್ರಿಗಳಿಂದ ಇಂದು ಪದಕ ಪಡೆದುಕೊಳ್ಳುತ್ತಿದ್ದರು.
ಅಂದಹಾಗೆ ಸರ್ಕಾರ ಕೊಡುವ ಪದಕಗಳು ಮತ್ತು ಪ್ರಶಸ್ತಿಗಳು ಮಾರಾಟವಾಗುತ್ತಿವೆಯಾ?
ಈ ರೀತಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮಗಳಲ್ಲಿ ತೊಡಗಿ ನೂರಾರು ಕೋಟಿ ಆಸ್ತಿ ಮಾಡಿರುವ ಮತ್ತು ಹಲವು ಸಂದರ್ಭಗಳಲ್ಲಿ ತಮ್ಮ ಕಾನೂನುಬಾಹಿರ ಕೃತ್ಯಗಳ ಕಾರಣಕ್ಕೆ ಲೋಕಾಯುಕ್ತ ರೇಡ್ ಆಗಿ ತನಿಖೆ ಎದುರಿಸುತ್ತಿರುವ ಮತ್ತು ಇಲಾಖೆಯಿಂದ ಶಿಸ್ತುಕ್ರಮಕ್ಕೆ ತುತ್ತಾಗಿರುವ ಇಂತಹ ಹಲವು ಜನರಿಗೆ ಸರ್ಕಾರ ಪದಕ ಮತ್ತು ಪ್ರಶಸ್ತಿಗಳನ್ನು ನೀಡುತ್ತಿರುವುದರಿಂದ ನನಗೆ ಸರ್ಕಾರ ಕೊಡುವ ಪ್ರಶಸ್ತಿ ಮತ್ತು ಪದಕಗಳು ಮಾರಾಟವಾಗುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ.
ಒಟ್ಟಾರೆ ಪೊಲೀಸ್ ಇಲಾಖೆ ಕೆಟ್ಟಿ ಕೆರಹಿಡಿದೆದೆ. ಯುನಿಫಾರ್ಮ್ ಧರಿಸಿರುವ ಬಹುತೇಕ ಪೊಲೀಸರು ಪರವಾನಗಿ ಪಡೆದ ರೌಡಿಗಳಂತೆ ಲೂಟಿ ಮಾಡುತ್ತಿದ್ದಾರೆ.
ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಇಂತಹ ಕಳ್ಳ ಪೊಲೀಸರನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಲೂಟಿಯಲ್ಲಿ ತೊಡಗಿದ್ದಾರೆ. ಇನ್ನು ಇಷ್ಟೆಲ್ಲಾ ವಿಚಾರಗಳು ಗೊತ್ತಿದ್ದರೂ ನಮ್ಮ ಮಹಾಜನತೆ ಇಂತಹ ಲೂಟಿಕೋರ ವ್ಯವಸ್ಥೆಯನ್ನು ನಿರ್ಮಿಸಿ ಪೋಷಿಸುತ್ತಿರುವ ಕಳ್ಳ-ಖದೀಮ ಜನರನ್ನೆ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ.








